Sunday 12 January 2014

ನಾನೇನಾ ಆ ರಾಯ ???

ಮುಂಜಾನೆ ಐದರ ಸಮಯ - ಮಹಾಪ್ರಭು ಕಾಡಾನೆಯೊಂದು ರಾಜ್ಯದೊಳಗೆ ನುಗ್ಗಿ ಪ್ರಜೆಗಳನ್ನು ಭಯಭೀತರನ್ನಾಗಿ ಮಾಡಿದೆ. ಬೆಳೆಗಳನ್ನು ನಾಶ ಮಾಡಿ, ರತ್ನ ವ್ಯಾಪಾರ ಮಳಿಗೆಗೆ ನುಗ್ಗಿ ಇಬ್ಬರನ್ನು ಹತ್ಯೆ ಮಾಡಿ, ವಿಟಲ ಮಂದಿರದ ಬಳಿ ಸುಳಿದಾಡುತ್ತಿದೆ. ತಾವು ಈ ಆಪತ್ತಿನಿಂದ ಪ್ರಜೆಗಳನ್ನು ಕಾಪಾಡಬೇಕು. 

ಆಗಿನ್ನು ದೇವರ ಪ್ರಾರ್ಥನೆ ಅಭಿಷೇಕವನ್ನು ಮುಗಿಸಿ ಉದಯಿಸುತಿರುವ ಸೂರ್ಯನ ದಿಟ್ಟಿಸಿ ನೋಡುತ್ತಿದ್ದ ನಮಗೆ ಸೇನಾದಿಪತಿ ತಂದ ವಿಷಯ. ನಾವು ಆಗ ಸೇನಾದಿಪತಿಯನ್ನು ಅವರು ಮಾಡಿರುವ ಪ್ರಯತ್ನದ ಬಗ್ಗೆ ಕೇಳಿದೆವು. ಸೇನಾದಿಪತಿಯು ತನ್ನ ಅನುಭವಕ್ಕೆ ತೋರಿದಂತೆ ಎಲ್ಲಾ ಪ್ರಯತ್ನವನ್ನು ಮಾಡಿದ್ದರು. ಇದೀಗ ನಮಗೆ ಸ್ಪಷ್ಟವಾಗಿ ಕಂಡ ದೃಶ್ಯ. ವೈರಿಯು ನಾನಾ ವೇಷ ಧರಿಸಿ ನಮ್ಮ ರಾಜ್ಯದ ಮೇಲೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಾರೆ. ನಮ್ಮಲ್ಲಿ ಭಯ ಭೀತಿ ಕಂಡರೆ ಅಂದಿಗೆ ಅಂತ್ಯವಾದೀತು ಈ ವಿಜಯನಗರ ಸಾಮ್ರಾಜ್ಯ. ಇದು ಇತಿಹಾಸ ನಮಗೆ ಹೇಳಿಕೊಟ್ಟ ರಹಸ್ಯ. ಈ ಕಾಡಾನೆಯ ತರದಿ ಅದೆಷ್ಟೋ ಬಾರಿ ನಮ್ಮ ಶಕ್ತಿಯ ಪರೀಕ್ಷೆ ನಡೆದಿದೆ. ಇಲ್ಲಿಯ ವರೆವಿಗೂ ಸಹಸ್ರ ಯುದ್ದಗಳನ್ನು ಜೈಸಿದ ನಮಗೆ ವಿಜಯವಿಟ್ಟಳನಿಂದ ಮತ್ತೊಂದು ಪರೀಕ್ಷೆಯೇ ? ಆ ತಾಯಿ ಭುವನೇಶ್ವರಿಯ ಕೃಪಾಕಟಾಕ್ಷ ನಮ್ಮ ಮೇಲೆ ಇರುವವರೆಗು ಕಾಡಾನೆಯ ಹಿಂಡೇ ಬಂದರು ಒಂಟಿಯಾಗಿ ಜೈಸಬಲ್ಲೆವು ನಾವು. 



ನಮ್ಮ ಯುದ್ದ ಶಾಲೆಯಲ್ಲಿ ಪಳಗಿದ ಗಂಡಾನೆ ಭೀಷ್ಮನ ಬೆನ್ನೇರಿ ಕೈಯಲ್ಲಿ ಹಗ್ಗದ ನುಣುಕು ಹಿಡಿದು ಹಾದಿ ತಪ್ಪಿ ಬಂದ ಆ ಕಾಡಾನೆಯ ಬಳಿಗೆ ಬರುತ್ತಲೇ ಅದು ಧಾಳಿ ಮಾಡಿತು, ಚಿಂ ಎಂದು ಅದರ ಮೇಲೆ ಹಾರಿ, ಮುಷ್ಟಿಯ ಬಿಗಿ ಮಾಡಿ ಅದರ ತಲೆಗೆ ಸಿಡಿಲೇ  ಬಡಿದಂತೆ ಆಕ್ರಮಿಸಿದೆವು. ಒಂದೇ ಏಟಿಗೆ ಪ್ರಗ್ನೆತಪ್ಪಿ ದಟ್ತೆಂದು ನೆಲ್ಲಕ್ಕುರುಳಿತು ಮದಿಸಿದ ಆ ಕಾಡಾನೆ. ಮತ್ತೊಂದು ಜಯ !




ಶಿಲ್ಪಿಗಳು ಕವಿಗಳು ಸಕಲ ಕಲಾವಲ್ಲಬರು ತುಂಬಿರುವ ನಮ್ಮ ಆಸ್ಥಾನದ ನೋಟವೇ ಒಂದು ಹೆಮ್ಮೆ. ವೈರಿಗಳಿಗೆ ಸಿಂಹ ಸ್ವಪ್ನವಾಗಿ ಭೀತಿಸುವ ನಮ್ಮ ಸೈನ್ಯ, ಅಪ್ಸರೆಗಳನ್ನೇ ನಾಚಿಸುವ ರಾಜ ನರ್ತಕಿಯರು, ಹಿರಿದಾಗಿ ನಮ್ಮ ಸಿಂಹಾಸನದ ಬಳಿ ರಕ್ತದೊಕುಳಿಗಾಗಿ ಸದಾ ಸಿದ್ದವಿರುವ ಖಡ್ಗ. ಈ ವೈಭವಗಳ ತಲೆತಲಾಂತರದಿಂದ ಕಾಪಾಡಿಕೊಂಡು ಬಂದ ಹಿರಿಮೆಯ ವಂಶ ನಮ್ಮದು. 


ಶ್ರೀ ಕೃಷ್ಣದೇವರಾಯ                                                        ಶ್ರೀ ವಿಶ್ವನಾಥ

ಇದು ನನ್ನ ಪುನರ್ಗೊಚರಿಸುವ ಸ್ವಪ್ನ, ಮತ್ತೆ ಮತ್ತೆ ಅದೇ ದೃಶ್ಯಗಳು, ರಣರಂಗದಲ್ಲಿ ವೈರಿಗಳ ರುಂಡಗಳ ಮಾರಣಹೋಮ, ಎಲ್ಲಿ ನೋಡಿದರಲ್ಲಿ ಹಸಿರು ತುಂಬಿರುವ ನನ್ನ ಸಾಮ್ರಾಜ್ಯ, ಮುಗಿಲೆತ್ತರಕೆ ನಿಂತ ಶಿಲೆಗಳು, ದಶಕವಿಡೀ ನಡೆದರು ಕೊನೆಗಾಣದ ಗಡಿ, ವಜ್ರ ವೈಡುರ್ಯಗಳಿಂದ ತುಂಬಿದ ಅರಮನೆ. 

ನಾನೇ ಆ ರಾಯನೆನ್ನಲು ಈ ಸ್ವಪ್ನವೇ ನನ್ನ ಸಾಕ್ಷಿ !



No comments:

Post a Comment